ನಮ್ಮ ಮನೆ ಹಿಂದಿರುವ ಅಗಸಿಯ ಹಳ್ಳಕ್ಕೆ ಒಗ್ಗಿಕೊಂಡು ನಿಂತಿದೆ. `ಅಗಸಿಯ` ಹಾದಿ ದುಡಿಮೆಯ ಜನರಿಗೆ ಹೆಗಲು ನೀಡುವ ರಾಶಿಕಟ್ಟೆ, ಸೊಂಬೆರಿಗಳಿಗೆ `ಎಲೆಗಳಂತಹ` ಮಜಾಚಟಗಳ ತಾಣವು ಹೌದು. ಮಿರಿ ಮಿರಿ ಕಂಗೊಳಿಸುವ ಸೇಡಂನ ಈ `ಅಗಸಿಯು` ತನ್ನತ್ತ ಬಂದ ಜನರಿಗೆ `ಫಲಾ` ತೃಪ್ತಿ ನೀಡುತ್ತದೆ. ಈ ಅಗಸಿಯ ಸುತ್ತಲು ಬದುಕನ್ನು ಕಟ್ಟಿಕೊಳ್ಳುವ ಕೆಲ ಮನೆಗಳಲ್ಲಿ ನನ್ನದು ಒಂದು ಮನೆ. ಅಗಸಿ ಹೋಗುವ ದಾರಿಯುದಕ್ಕೂ ಶಿಲ್ಪ ಕಲೆ ಸ್ತಂಭಗಳು ಹಾರುತ್ತ ಆಕಾಶಕ್ಕೆ ಕೈ ಹಾಕುತ್ತಿವೆ. ಕಲ್ಲಿನ ಕೋಳಿಗಳೆರಡು ಎಡ-ಬಲದಲ್ಲಿ ಕೂಗೊ ಹಾಗೆ ಎದ್ದು ಕಾಣುತ್ತವೆ. ಕಾಲನಿರ್ಣಯದಂತೆ ಅಂತಿಮಯಾತ್ರೆಯ ಕೊನೆ ಹಾದಿಯು `ಅಗಸಿ`ಯ ಮಹಾದ್ವಾರ. ಅಗಸಿಯ ಮಹಾದ್ವಾರದ ಪಕ್ಕದಲ್ಲೆ ಪುರಾತನ ಆಂಜನೇಯ ದೇಗುಲವು ವಿಷ ಜಂತುಗಳ ತಾಣವಾಗಿ ಭಯ ಹುಟ್ಟಿಸುವ ದೇಗುಲವಾಗಿದೆ ಎಂದು ಅಗಸಿಮಂದಿ ಮಾತಾಡಿಕೊಳ್ಳುತ್ತಿದ್ದರಷ್ಟೆ ಹೊರತು ದೇಗುಲದ ಸ್ವಚ್ಛತೆಗೆ ಎಂದು ಮುಂದೆ ಬರುತ್ತಿರಲಿಲ್ಲ. ಆದರೆ ಇದನ್ನು ಮನಗಂಡ ಅಗಸಿ ಯುವಕರು ಸುಮ್ಮನಿರಲಿಲ್ಲ ತಮ್ಮದೆ ಆದ ಗುಂಪೊಂದನ್ನು ಕಟ್ಟಿಕೊಂಡು ಹನುಮ ದೇಗುಲದ ಜೀರ್ಣೋದ್ಧಾರಕ್ಕೆ ಪಣತೊಟ್ಟರು. ತಮ್ಮ ಪ್ರತಿದಿನದ ಕಾರ್ಯಗಳಲ್ಲಿ ಗುಡಿಯ ಉದ್ಧಾರವು ಒಂದು ಎಂದು ತಿಳಿದು ತನು,ಮನ,ದನಗಳನ್ನು ಅರ್ಪಿಸಿ ದುಡಿಯುತ್ತಿದ್ದರು. ಆ ಯುವಕರುಗಳಲ್ಲಿ ಜನಾರ್ಧನರೆಡ್ಡಿ,ಬಸ್ಸೂ ,ಸದಾನಂದರೆಡ್ಡಿ, ನಾಗಭೂಷಣ,ಗುರು ಬೋಳದ್ ,ಸಂಜೀವ್ ಇವರುಗಳ ಪಾತ್ರ ಬಹುಮುಖ್ಯವಾದದ್ದು. ಮನೆಯಲ್ಲಿ ಅಪ್ಪ-ಅಮ್ಮಂದಿರು ಮನೆ ಸಂಸಾರ ಬಿಟ್ಟು ಕೆಲಸಕ್ಕೆ ಬಾರದ ಊರುದ್ಧಾರ ಮಾಡುತ್ತಾರೆ ಅಂಥ ಬೈದ್ರು ಈ ಯುವಕರು ತಲೆ ಕೆಡಿಸಿಕೋಳ್ಳದೆ.
ಹನುಮ ದೇವಾಲಯವನ್ನು ಶುಚಿಗೊಳಿಸಿ,ಅಲ್ಲಿದ್ದ ಗಿಡ,ಗಂಟೆಗಳನ್ನು ತೆಗೆದು ದೇವಾಲಯಕ್ಕೆ ಅನುಗುಣವಾಗಿ ಗೋಡೆಕಟ್ಟಿ ಹಾಸುಗಲ್ಲನ್ನು ಹಾಸಿ, ಬೇಳಕಿನ ವ್ಯವಸ್ಥೆ, ನೀರಿನ ಸರಬರಾಜು, ಪ್ರತಿ ಹನುಮ ಜಯಂತಿಯಂದು ವಿಶೇಷ ಹೋಮಗಳನ್ನು ಮಾಡುವರು. ಊರ ಜನ ಪ್ರತಿದಿನ ಈ ದೇವಾಲಯಕ್ಕೆ ಬಂದು ದರ್ಶನ ಪಡೆದು ಸ್ವಲ್ಪ ಸಮಯ ಕುಳಿತು ಮನ ತಣಿಸಿಕೊಳ್ಳುತ್ತಾರೆ. ಅಗಸಿಯ ಮಹದ್ವಾರದ ಕರಾಳ ಇತಿಹಾಸದ ಕಾಲಗರ್ಭದಲ್ಲಿ ಹುದುಗಿ ಹೋಗಿದ್ದ ಹನುಮ ದೇವಾಲಯವನ್ನು ಈ ಯುವಕರ ನೇತೃತ್ವದಲ್ಲಿ ಮರುಜೀವ ಪಡೆದು. ಭಕ್ತಿಯ ರಾರಾಜುವಿಕೆಯಾಗಿದೆ.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ